
23rd June 2025
ಪತ್ರಿಕಾರಂಗ ಕೇವಲ ಉದ್ಯಮವಲ್ಲ, ಸಮಾಜದ ಕನ್ನಡಿ
ಭೂಲೋಕದಲ್ಲಿ ಕುಳ್ಳಿರ್ದು ಆಕಾಶದ ಸುದ್ದಿಯ ನುಡಿದರೆ
ಆಕಾಶದ ನೆಲೆಯ ಬಲ್ಲರೆ ಅಯ್ಯ?
ಪಾತಾಳಲೋಕದಲ್ಲಿದ್ದವರು ಕೈಲಾಸದ ಸುದ್ದಿಯ ನುಡಿದರೆ
ಕಂಡಂತೆ ಆಗಬಲ್ಲುದೆ ಅಯ್ಯ?
ತತ್ವಶಾಸ್ತ್ರವನೋದಿ
ತತ್ವಮಸ್ಯಾದಿ ವಾಕ್ಯಾರ್ಥಂಗಳ ತಿಳಿದು
ತತ್ವಮಸಿಯಾದನೆಂಬವರೆಲ್ಲಾ ಎತ್ತ ಹೋದರೋ?
ವ್ಯರ್ಥವಾಗಿ ಸತ್ತು ಹೋದರಲ್ಲ.
ಇದು ಕಾರಣ, ನಿಮ್ಮ ಶರಣರು
ಉತ್ಪತ್ತಿ ಸ್ಥಿತಿ ಪ್ರಳಯರಹಿತವಾದ ಮಹಾಲಿಂಗದಲ್ಲಿ
ಸಂಯೋಗವಾದ ಅಚ್ಚ ಲಿಂಗೈಕ್ಯರಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸಾಯದವರು ಸತ್ತವರ ಸುದ್ದಿಯ ಕೇಳಿ,
ಇದ್ದವರಿಗೆ ಹೇಳಿ ಸಾಯೆಂಬರು.
ಹೇಳದವರು ಸಾಯದೆ, ಕೇಳದವರು ಸಾಯದೆ,
ಇವರ ಸುದ್ದಿಯ ನೆರೆಮನೆಯವರು ಕೇಳಿ ಸತ್ತುಹೊದರು.
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.
ಕಾಡಸಿದ್ಧೇಶ್ವರ
ಬೆಳಗಾವಿ ದಿ.22: ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ, ಮಹಾಂತೇಶ ನಗರ, ಬೆಳಗಾವಿಯಲ್ಲಿ ದಿನಾಂಕ.22.06.2025ರಂದು ವಚನ ವಿಶ್ಲೇಷಣೆ ಸಾಮೂಹಿಕ ಪ್ರಾಥ೯ನೆ ಜರುಗಿತು.
ಪತ್ರಿಕೋದ್ಯಮ ಕುರಿತು ಸುನಿಲ ಸಾಣಿಕೊಪ್ಪ ಉಪನ್ಯಾಸ ನೀಡಿದರು. ಸಂವಿಧಾನದ 4ನೇ ಅಂಗ ಪತ್ರಿಕಾರಂಗವಾಗಿದೆ. ಕಾರ್ಯಾಂಗ, ಶಾಸಕಾಂಗಗಳು ತಪ್ಪಿ ನಡೆದರೆ ನ್ಯಾಯಾಂಗ ತಿದ್ದುವ ಕೆಲಸ ಮಾಡುತ್ತದೆ. ಆದರೆ ಈ ಮೂರು ಅಂಗಗಳು ತಪ್ಪಿದಾಗ ಸರಿದಾರಿಗೆ ತರುವ ಶಕ್ತಿ ಪತ್ರಿಕಾ ರಂಗಕ್ಕೆ ಇದೆ.
ಎಷ್ಟೇ ತಂತ್ರಜ್ಞಾನ ಆಧುನಿಕ ಸಂವಹನ ಮಾಧ್ಯಮಗಳು ಬಂದರೂ ಪತ್ರಿಕೆಗಳು ಬೆಳೆಯುತ್ತಿವೆ. ದೇಶದಲ್ಲಿ 1947ರಲ್ಲಿ 200ರಷ್ಟು ಇದ್ದ ಪತ್ರಿಕೆಗಳು ಇಂದು ಒಂದೂವರೆ ಲಕ್ಷ ಆಗಿವೆ. ಇದು ಕಾಗದದ ಓದಿಗೆ ಡಿಜಿಟಲ್ ತಂತ್ರಜ್ಞಾನ ಸಮವಲ್ಲ ಎಂಬುದಕ್ಕೆ ನಿದರ್ಶನ ಎಂದು ಹೇಳಿದರು.. ಟ್ಯಾಬ್ಲಾಯ್ಡ ಪಿತಾಮಹ ಲಂಕೇಶ್ ಅವರ ಪತ್ರಿಕೆ ಮಾಡಿದ ಕ್ರಾಂತಿಯಂತೆ ಪತ್ರಿಕೆಗಳು ಸಮಾಜ ಪರಿವರ್ತನೆ ಮಾಡಬೇಕು. ಇದಕ್ಕಾಗಿ ಪತ್ರಿಕೆಗಳು ಆಳವಾದ ಅಧ್ಯಯನ ಮಾಡಿ ನಿರ್ಭೀತ, ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠ ಸತ್ಯವನ್ನು ಪ್ರತಿಪಾದಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಇದೇ ಸಂದಭ೯ದಲ್ಲಿ ನಂದೀಶ ಮೆಣಸಿನಕಾಯಿ ಅವರ ಮುಂಜಾನೆ ಬೆಳಕು ಪಾಕ್ಷಿಕ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಶರಣ ಈರಣ್ಣಾ ದೇಯಣ್ಣವರ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿ ಯೋಗಾ ಗುರುಗಳಾದ ಶ್ರೀ ಸಿದ್ದಪ್ಪ ಸಾರಾಪುರಿ ಭಾಗವಹಿಸಿದ್ದರು ಫ್ರಾರಂಭದಲ್ಲಿ ಸುರೇಶ ನರಗುಂದ ಅವರು ಸಾಮೂಹಿಕ ಪ್ರಾಥ೯ನೆ ನಡಿಸಿಕೊಟ್ಟರು. ಜಾಹ್ನವಿ ಘೊಪ೯ಡೆ, ಜಯಶ್ರೀ ಚಾವಲಗಿ, ಸುವಣ೯ ಗುಡಸ,ವಿ.ಕೆ.ಪಾಟೀಲ, ಆನಂದ ಕರಕಿ, ಬಸವರಾಜ ಬಿಜ್ಜರಗಿ ಮುಂತಾದ ಶರಣಶರಣೆಯರು ವಚನ ವಿಶ್ಲೇಷಣೆ ಮಾಡಿದರು.
ಅಧ್ಯಕ್ಷತೆ ವಹಿಸಿದ ಈರಣ್ಣಾ ದೇಯನ್ನವರ ಅವರು ಪತ್ರಿಕೆಯಲ್ಲಿ ಶೈಕ್ಷಣಿಕ, ಸಾಮಾಜಿಕ, ಕ್ರೀಡೆ, ಆರೋಗ್ಯ, ಸಾಹಿತ್ಯ ಹೀಗೆ ಎಲ್ಲ ವಿಷಯವಿರಬೇಕು. ಜನರಿಗೆ ಏನು ಅವಶ್ಯಕವಿದೆಯೋ ಅದನ್ನು ಸಮಾಜಕ್ಕೆ ಮುಟ್ಟುವಂತಹ ಕಾಯ೯ವಾಗಲಿ ಎಂದು ಹಾರೈಸಿದರು. ನಂದೀಶ ಮೆಣಸಿನಕಾಯಿ ನಿಮ್ಮೆಲ್ಲರ ಸಲಹೆ ಸೂಚನೆ ಗಮನದಲ್ಲಿ ಇರಿಸಿ ಮುನ್ನೆಡೆಯುವೆ ಎಂದರು.
ಇದೇ ಸಂದರ್ಭದಲ್ಲಿ ನೀಟ್ ಪರೀಕ್ಷೆಯಲ್ಲಿ 625 ಅಂಕ ಪಡೆದು ಸಾಧನೆ ಮಾಡಿದ ಪ್ರಜ್ವಲ್ ತೋರಣಗಟ್ಟಿ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು. ಪ್ರಜ್ವಲ್ ತೋರಣಗಟ್ಟಿ ಮಾತನಾಡಿ ಚಿಕ್ಕವನಿರುವಾಗ ಪ್ರತಿ ರವಿವಾರ ಲಿಂಗಾಯತ ಸ೦ಘಟನೆಯ ಪ್ರಾಥ೯ನೆಯಲಿೢ ಭಾಗವಹಿಸಿ ವಚನಗಳನ್ನು ಹೇಳುತ್ತಿದ್ದೆ ನನ್ನ ಸಾಧನೆಗೆ ಬಸವ ತತ್ವವೇ ಪ್ರೇರಣೆಯಾಗಿದೆ. ಇಷ್ಟಲಿಂಗ ಪೂಜೆಯಿಂದ ನನ್ನ ಏಕಾಗ್ರತೆ ಹೆಚ್ಚಾಯಿತು, ವಚನಗಳನ್ನು ಕಂಠಪಾಠ ಮಾಡುವ ಮೂಲಕ ನೆನಪಿನ ಶಕ್ತಿ ಹೆಚ್ಚಾಯಿತು ಎಂದು ತಿಳಿಸಿದರು.
ದೇಯಣ್ಣವರ ಕುಟುಂಬ ದಾಸೋಹ ಸೇವೆಗೈದರು. ಅಕ್ಕಮಹಾದೇವಿ ತೆಗ್ಗಿ, ಶಿವಾನ೦ದ ಅರಬಾವಿ, ಮುಕ್ತಾ ಬಸವರಾಜ ದೇಯನ್ನವರ, ಸುರೇಖಾ ಕಿರಣ ದೇಯನ್ನವರ,ಶೋಬಾ ಹಾಗೂ ಮ೦ಜುಳಾ ದೇಯನ್ನವರ,ಕೆಂಪ್ಪಣ್ಣ ರಾಮಾಪುರಿ , ಮಹದೇವ ಕೆ೦ಪಿಗೌಡರ , ಬಾಬಣ್ಣ ತಿಗಡಿ, ಬಸವರಾಜ ಕರಡಿಮಠ, ಮ.ಕಾಡೆ ಗಂಗಪ್ಪ ಉಣಕಲ, ಶೇಖರ ವಾಲಿ ಇಟಗಿ, ಗುರುಸಿದ್ದಪ್ಪ ರೇವಣ್ಣವರ, ಗದಿಗೆಪ್ಪ ತಿಗಡಿ, ಸೋಮಶೇಖರ ಕತ್ತಿ, ಮಹಾ೦ತೇಶ ಮೆಣಸಿನಕಾಯಿ , ಪ್ರಕಾಶ ಮರಲಿ೦ಗಣ್ಣನವರ, ಬಿ. ಬಿ.ಮಠಪತಿ, ಡಾ.ಅ.ಬ.ಇಟಗಿ, ಶಿವಾನಂದ ತಲ್ಲೂರ, ಜ್ಯೋತಿ ಬಾದಾಮಿ, ಕಮಲಾ ಗಣಚಾರಿ, ಮುಂತಾದ ಶರಣಶರಣೆಯರು ಉಪಸ್ಥಿತರಿದ್ದರು. ಸಂಗಮೇಶ ಅರಳಿ ನಿರೂಪಿಸಿದರು. ಸುರೇಶ ನರಗುಂದ ವಂದಿಸಿದರು.
ಶ್ರೀಮತಿ ತಂಗವ್ವ ನಂದಪ್ಪ ಬಾಗೇವಾಡಿ ಇವರ ಶತಮಾನೋತ್ಸವದ ಕಾರ್ಯಕ್ರಮ ಮತ್ತು ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನ ಸಮಾರಂಭ
ಬೈಲಹೊಂಗಲದಲ್ಲಿ ಮಲಪ್ರಭಾ ಹಾಸ್ಪಿಟಲ್ ಉದ್ಘಾಟನೆ ನೂತನ ಆಸ್ಪತ್ರೆಯಿಂದ ಜನರ ಆರೋಗ್ಯ ಸಮಸ್ಯೆ ದೂರವಾಗಲಿ - ಡಾ.ಶಿವಾನಂದ ಭಾರತಿ ಸ್ವಾಮಿಜಿ
ಕನ್ನಡದ ಹೆಸರಾಂತ ಕಲಾವಿದ ರಂಗಕರ್ಮಿ ಕನ್ನಡಪರ ಹೋರಾಟಗಾರ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾದ ಕೆ ವಿ ನಾಗರಾಜ ಮೂರ್ತಿ ಹಾಗೂ ಪ್ರಿಯಾಂಕ ಮಾಸಪತ್ರಿಕೆ ಎಕ್ಸಿಕ್ಯೂಟಿವ್ ಸಂಪಾದಕಿ ಎಸ್. ಜಿ. ತುಂಗಾ ರೇಣುಕಾ ದಂಪತಿಗಳಿಂದ ಮುಂಜಾನೆ ಬೆಳಕು